ವಧು ಪರೀಕ್ಷೆ

ವಧು ಪರೀಕ್ಷೆ ನಡೆದಿದೆ
ಜಾತಕ ಫಲಗಳೆಲ್ಲ ಕೂಡಿ|
ಹಿರಿಯರೆಲ್ಲರೂ ಒಂದೆಡೆ ಸೇರಿ
ಕನ್ಯೆಯೋರ್ವಳ ಸಂಸಾರ ದೀಕ್ಷೆಗೆ||

ಗುಣ ಗಣಗಳನ್ನೆಲ್ಲಾ ಗಣನೆ ಮಾಡಿ
ಎರಡು ಜಾತಕಗಳ ತಾಳೆ ನೋಡಿ|
ತುಂಬು ಸೌಹಾರ್ದತೆಯಿಂದ
ಕನ್ಯೆ ಇವಳ ಮನಸ ಅರಿಯೆ
ಮೆಲು ದನಿಯಲಿ ಪ್ರಶ್ನೊತ್ತರ ಕೇಳಿ||

ವರನ ಅಕ್ಕ ಭಾವ,
ಅಣ್ಣ ಅತ್ತಿಗೆಯರೆಲ್ಲಾ ವಧುವ ನೋಡಿ|
ಹಣ್ಣು ಹೂವು ತಾಂಬೂಲ ನೀಡಿ
ಬಂಧು ಮನೆಯ ಫಲಹಾರ ಸವಿಯ ನೋಡಿ|
ವಧುವಿನ ಚಲನವಲನ ಸೂಕ್ಷ್ಮವಾಗಿ ಗಮನಿಸಿ
ಎಲ್ಲಾ ಸರಿಯಾಗಿದೆ ಎಂದು ಊಹೆ ಮಾಡಿ
ಸಂಭ್ರಮ ಸಡಗರದೆ ಓಡಾಡಿ||

ವಧುವಿನಮ್ಮ, ಅಣ್ಣ ಅತ್ತಿಗೆ
ವರನನೋಡಿ, ಒಳಗೆ ಅಂದುಕೊಂಡು
ಇಬ್ಬರದು ಒಳ್ಳೆಯ ಜೋಡಿ|
ಪೂರ್ಣ ಮನಸಲಿ ಒಪ್ಪಿಗೆ ನೀಡಿ
ಮುಂದಿನ ಆರತಿ ಹಸೆಯ ಕನಸ ಹೂಡಿ
ತುಂಬು ಹೃದಯದಿ ತಾಂಬೂಲ ಹಸ್ತಾಂತರಿಸಿ
ಬಂಧ ಸಂಬಂಧವಾಗಿ ಎಲ್ಲರೂ ವಧು ವರನ ಹರಸಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕಾಚಾರ
Next post ಮನದ ಹುನ್ನಾರ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys